ವಿಜಯಭಾಸ್ಕರ
ಗಟ್ಟಿ ಮನಸು ಮಾಡಿದೆ.
ನೀ ಕಿರುಚ್ಚಿದ್ದು ಕೇಳಲಿಲ್ಲ
ಯಾಕೆಂದರೆ ನಾನು ಗಟ್ಟಿ ಮನಸು ಮಾಡಿದ್ದೆನೆ.
ದುಂಬಲು ಪ್ರೀತಿ ಇದ್ದರು ತಕರಾರಿಲ್ಲ.
ಮುತ್ತಿನ ಝೇಂಕಾರವಿದ್ದರು ಪರವಾಗಿಲ್ಲ.
ನಾ ಮರೆತು ಗಟ್ಟಿ ಮನಸು ಮಾಡಿದ್ದಾಗಿದೆ...
ತಡವಾಯಿತು ಈಗ...ಕೋಪ ಚುರು ನೆತ್ತಿಗೆ ಜಾಸ್ತಿ ನನಗೆ.
ಹೊಗೆ.
ಮೂಳೆ ಬೂದಿ ಮಸಣದಲ್ಲಿ.
ಮಡಿಕೆ ಬೂದಿ ಗಂಗೆಯಲ್ಲಿ.
ಕಾಲಚಕ್ರ ಉರುಳಿದಂತೆ ಮಣ್ಣಲ್ಲಿ ನಶಿಸಲಿದೆ ಮೈ.
ಕರಾಳ ರಾತ್ರಿ.
ಭಾರ ಮನಸ್ಸು
ತುಂಬು ಕಣ್ಣೀರು
ಸುಡುತ್ತಿದೆ ಮೈ ಮನ,ದಣಿವು ನೀಗಿಸಲು
ಉಸಿರು ನಿಲ್ಲಬೇಕು